ಅಗಿರೀಕ್ಷಿತ ಸಂದರ್ಭ ಎದುರಿಸುವುದು ಹೇಗೆ?
ಕೆಟ್ಟ ಬೈಗುಳ ಬಳಸುವವರ ಮುಂದೆ ನಾವೂ ಅದನ್ನೇ ಮಾಡದೆ, ದೇವರಲ್ಲಿ ಪ್ರಾರ್ಥಿಸಿ ಅಂತವರನ್ನು ಕ್ಷಮಿಸಿ ಸನ್ಮಾರ್ಗ ತೋರು ಎಂಬ ಸಕಾರಾತ್ಮಕ ಕೆಲಸ ಮಾಡಬೇಕಾಗುವುದು. ಯಾರಾದರೂ ಹೊಡೆಯಲು, ಅಕ್ರಮಣ ಮಾಡಲು ಬಂದರೆ ಅಥವಾ ಅಂತಹ ಘಟನೆ ಗಮನಿಸಿದರೆ ತಕ್ಷಣ ಸಾಧ್ಯವಾದಷ್ಟು ನಿಮ್ಮ ಸುರಕ್ಷತೆಗೆ ಒತ್ತು ಕೊಟ್ಟು ದೂರ ಬರಬೇಕು. ಕೂಡಲೇ ಪೊಲೀಸ್ ಸಹಾಯವಾಣಿಗೆ ಕರೆ ಮಾಡಬಹುದು ಅಥವಾ ಅಪರಿಚಿತರಿಗೂ ವಸ್ತುಸ್ಥಿತಿ ವಿವರಿಸಿ ಸಹಾಯಕ್ಕೆ ಕೂಗಬಹುದು. ಇನ್ನೂ ಪರಿಸ್ಥಿತಿ ಕೈಮೀರಿ ಮಕ್ಕಳ ಮೇಲೆ ಹಲ್ಲೆ ಮುಂತಾದವು ಆಗುವಾಗ ಆ ಸ್ಥಳ, ವ್ಯಕ್ತಿ, ಸಮಸ್ಯೆಯಿಂದ ಶಕ್ತಿಮೀರಿ ಹೋರಾಡಲೇಬೇಕು ಅಥವಾ ಅಂತಹ ಘಟನೆ ಅನ್ನ ಮಕ್ಕಳ ಮೇಲೆ ನಡೆದಾಗ ಅಳುತ್ತಾ ಕೂಗದೆ ಮೊಬೈಲ್ ಮೂಲಕ ವಿಡಿಯೋ ಮಾಡಿ ಇಮೇಲ್ ಮುಖಾಂತರ ಪೊಲೀಸ್ ಇಲಾಖೆಗೆ ಕಳಿಸಬಹುದು. ಸತ್ಯ ಘಟನೆಗಳನ್ನು ಕುರಿತು ಸಾಕ್ಷಿ ವಿವರ ಕುರಿತು ಹೈಕೋರ್ಟ್, ಪೊಲೀಸ್ ವ್ಯವಸ್ಥೆಯ ಪತ್ರ ಬರೆಯಬಹುದು. ಇದು ಅತ್ಯುತ್ತಮ ದಾಖಲೆಯಾಗುವುದು. ಇದರಿಂದ ನಿಮ್ಮ ಹೆಸರು ಗೌಪ್ಯವಾಗಿ ಇದ್ದರೂ ಘಟನೆಯಲ್ಲಿ ಬಾಧಿತರಿಗೆ ನ್ಯಾಯ ದೊರಕಿಸಲು ಸಹಾಯ ಆಗುತ್ತದೆ.
ಮಕ್ಕಳು ಅಪಾಯದ, ನೋವಿನ, ಹಿಂಸೆಯ ಸಂದರ್ಭ ಎದುರಿಸುವಾಗ ಸಾಧ್ಯವಾದಷ್ಟು ಜನರ ಗುಂಪಿನ ಬಳಿ ಹೋಗಲು ಯತ್ನಿಸಬೇಕು. ಒಂಟಿಯಾಗಿ ಎದುರಿಸಲು ಚಿಕ್ಕ ವಯಸ್ಸಿನ ಮಕ್ಕಳಿಗೆ ಶಕ್ತಿ ಸಾಲದು. ಆದರೆ ತಪ್ಪು ಗ್ರಹಿಸಿ ಕೂಡಲೇ ತಪ್ಪು ಮಾಡಲು ಅಥವಾ ಕೆಟ್ಟದ್ದಾದ ರೀತಿ ನಡೆಸಿಕೊಳ್ಳಲು ಬಂದಿರುವ ಜನರಿಂದ ಕೂಡಲೇ ದೂರ ಬರಬೇಕು.
NO means NO
ಆತಂಕಕಾರಿಯನ್ನು ತಡೆಯಬೇಕು. ಒಂದೊಮ್ಮೆ ಅಪರಿಚಿತರು ಹೊಡೆಯಲು ಬಂದರೆ ಮೊದಲು 'ಹೊಡೆಯಬೇಡ' ಎಂದೇ ತಡೆಯಬೇಕು. ಕೇಳದೆ ಇದ್ದಾಗ ಗಟ್ಟಿಯಾಗಿ ಕಿರುಚಲು ಯತ್ನಿಸಬೇಕು. ನಮ್ಮ ಧ್ವನಿ, ಶಕ್ತಿ ಮೀರಿ ಕಿರುಚಿದಾಗ ಆಂತಂಕಕಾರಿ ಭಯಬಿದ್ದು ಓಡುವ ಸಂದರ್ಭ ಹೆಚ್ಚು. ಅದೂ ನಡೆಯದಿದ್ದಾಗ ಕಾಲಿಗೆ ಬುದ್ಧಿ ಹೇಳಿ. ಜನರು ಇರುವ ಕಡೆ ಸೇರಿ. ಜನರ ಸಹಾಯ ನಿರೀಕ್ಷಿಸಿ ನಿಲ್ಲಬೇಡಿ. ಓಡುತ್ತಾ ಹೋದರೆ ಅಂತಃಕರಣ ಉಳ್ಳವರು ಖಂಡಿತಾ ಸಹಾಯಸ್ತ ಚಾಚುತ್ತಾರೆ.
ಇತಿಹಾಸದಲ್ಲಿ ಇಂದು
9 ನವೆಂಬರ್ 2025
-
UNRRA ಸಂಸ್ಥೆ ರಚನೆ: 1943ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಪುನರ್ವಸತಿ ಆಡಳಿತ (UNRRA) ಸಂಸ್ಥೆಯನ್ನು ರಚಿಸಲು 44 ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದದ ಉದ್ದೇಶ ಎರಡನೇ ಮಹಾಯುದ್ಧದಿಂದ ಹಾನಿಗೊಳಗಾದ ರಾಷ್ಟ್ರಗಳನ್ನು ಸಂಘಟಿಸುವುದು, ಸಹಾಯ, ಪರಿಹಾರ ಸಾಮಗ್ರಿಗಳನ್ನು ಒದಗಿಸುವುದು, ಜೇತರಿಕೆಗೆ ಸಹಾಯ ಮಾಡುವುದು ಮತ್ತು ಸ್ಥಳಾಂತರಗೊಂಡ ವ್ಯಕ್ತಿಗಳು ಮತ್ತು ಕೈದಿಗಳನ್ನು ವಾಪಸ್ ಕಳುಹಿಸುವಲ್ಲಿ ಸಹಾಯ ಮಾಡುವುದಾಗಿತ್ತು.
-
ಆಲ್ಬರ್ಟ್ ಐನ್ಸ್ಟೈನ್: ದ್ಯುತಿವಿದ್ಯುತ್ ಪರಿಣಾಮದ ವಿವರಣೆಗಾಗಿ ಆಲ್ಬರ್ಟ್ ಐನ್ಸ್ಟೈನ್ ಅವರನ್ನು 1921ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ಎಂದು ಹೆಸರಿಸಲಾಯಿತು. ನೊಬೆಲ್ ಸಮಿತಿಯು 1921ರ ಪ್ರಶಸ್ತಿಯನ್ನು 1922ರಲ್ಲಿ ನೀಡಿತು.
-
ಗ್ಯಾರಿ ಕಾಸ್ಪರೋವ್: 22 ವರ್ಷ ವಯಸ್ಸಿನ ಗ್ಯಾರಿ ಕಾಸ್ಪರೋವ್, 1985ರಲ್ಲಿ ಅನಾಟೊಲಿ ಕಾರ್ಪೋವ್ ಅವರನ್ನು ಸೋಲ್ಸಿಹಿ ಅತ್ಯಂತ ಕಿರಿಯ ಪುರುಷ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
-
ಡೊರೊಥಿ ಡ್ಯಾಂಡ್ರಿಡ್ಜ್: ಅತ್ಯುತ್ತಮ ನಟಿಗಾಗಿ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಕಪ್ಪು ಮಹಿಳೆ, ಅಮೆರಿಕನ್ ಗಾಯಕಿ ಮತ್ತು ಚಲನಚಿತ್ರ ನಟಿ ಡೊರೊಥಿ ಡ್ಯಾಂಡ್ರಿಡ್ಜ್ 1922ರಲ್ಲಿ ಅಮೆರಿಕದ ಕ್ಲೀಮ್ಲ್ಯಾಂಡ್ನಲ್ಲಿ ಜನಿಸಿದರು.
-
ಇವಾಂಡರ್ ಹೋಲಿಫೀಲ್ಡ್: 1996ರಲ್ಲಿ ಮೈಕ್ ಟೈಸನ್ ಅವರನ್ನು ಟೆಕ್ನಿಕಲ್ ನಾಕೌಟ್ ಮಾಡುವ ಮೂಲಕ ಮೂರನೇ ಬಾರಿಗೆ ಹೆವಿವೇಯ್ಲ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆದ್ದರು.
ರಾಷ್ಟ್ರೀಯ ಕಾನೂನು ಸೇವೆಗಳ ದಿನ
ಪ್ರತಿವರ್ಷ ನ.9ರಂದು ಭಾರತದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಸಮಾಜದ ಅದರಲ್ಲಿಯೂ ದುರ್ಬಲ ವರ್ಗಗಳ ಜನರಿಗೆ ಕಾನೂನು ಸೇವೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಘೋಷಿಸಲಾಯಿತು.
ಜನ್ಮ ದಿನ ಶಂಕರ್ನಾಗ್
- ಪಾದರಸದಂಥ ವ್ಯಕ್ತಿತ್ವ ಸಾಧನೆಯಿಂದ ಚಿರಕಾಲ ಕನ್ನಡಿಗರ ಮನದಲ್ಲಿ ಸ್ಥಾನ ಪಡೆದಿರುವ ಚಿತ್ರಕರ್ಮಿ ಶಂಕರ್ನಾಗ್ 1954ರ ನ.9ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಜನಿಸಿದರು. "ಒಂದಾನೊಂದು ಕಾಲದಲ್ಲಿ" ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು ಚಿತ್ರಕಥೆ, ನಿರ್ದೇಶನ, ನಿರ್ಮಾಣ ಹೀಗೆ ಸಿನಿಮಾದ ಬಹುತೇಕ ವಿಭಾಗಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಸಾಮಾಜಿಕ ಕಾರ್ಯಗಳಿಗೂ ಅವರು ಹೆಸರು ಮಾಡಿದ್ದಾರೆ. ಮಿಂಚಿನ ಓಟ, ಕಾರ್ಮಿಕ ಕಳ್ಳನಲ್ಲ, ನೋಡಿ ಸ್ವಾಮಿ ನಾವಿರೋದೆ ಹೀಗೆ, ಆ್ಯಕ್ಟ್ರಿ, ಆಟೋ ರಾಜ, ಸಾಂಗ್ಲಿಯಾನ ಅವರ ಕೆಲ ಜನಪ್ರಿಯ ಸಿನಿಮಾ ಗಳು. ಮಾಲ್ಕುಡಿ ಡೇಸ್ ಧಾರಾವಾಹಿಯ ನಿರ್ದೇಶನ ಅವರಿಗೆ ದೇಶಾದ್ಯಂತ ಅಪಾರ ಖ್ಯಾತಿ ತಂದು–ಕೊಟ್ಟಿತು. 1990ರಲ್ಲಿ ಅವರು ನಿಧನರಾದರು.
ಸಾಮಾನ್ಯ ಮಾದರಿ ಪಡೆಯುತ್ತಿದೆ
37. ಈ ಕೆಳಗಿನ ಯಾವ ಕ್ರೀಡೆಯಲ್ಲಿ 7 ಆಟಗಾರರ ಗುಂಪು ಇರುತ್ತದೆ?
-
- ಕಬಡ್ಡಿ ಹಾಗೂ ನೆಟ್ಬಾಲ್
-
- ಕಬಡ್ಡಿ ಹಾಗೂ ವಾಲಿಬಾಲ್
-
- ವಾಟರ್ ಪೋಲೊ ಹಾಗೂ ವಾಲಿಬಾಲ್
-
- ವಾಟರ್ ಪೋಲೊ ಹಾಗೂ ನೆಟ್ಬಾಲ್
ಉತ್ತರ: 3. ವಾಟರ್ ಪೋಲೊ ಹಾಗೂ ನೆಟ್ಬಾಲ್
38. ಪ್ರಥಮ ಮಹಿಳಾ ವಿಶ್ವಕಪ್ ಕ್ರಿಕೆಟ್ಗೆ ಅತಿಥ್ಯ ವಹಿಸಿಕೊಂಡ ದೇಶ ಯಾವುದು?
- ಆಸ್ಟ್ರೇಲಿಯಾ
- ಇಂಗ್ಲೆಂಡ್
- ಭಾರತ
- ದಕ್ಷಿಣ ಆಫ್ರಿಕಾ
ಉತ್ತರ: ಇಂಗ್ಲೆಂಡ್
39. ಬೇಸ್ಬಾಲ್ ಮೈದಾನಕ್ಕೆ ಯಾವ ಹೆಸರಿನಿಂದ ಕರೆಯಲಾಗುತ್ತದೆ?
- ಡೈಮಂಡ್
- ರಿಂಗ್
- ಕೋರ್ಸ್
- ರೇಂಜ್
ಉತ್ತರ: ಡೈಮಂಡ್
40. ಒಲಿಂಪಿಕ್ಸ್ನಲ್ಲಿ ಬಂಗಾರ ಪದಕ ವಿಜೇತ ಪ್ರಥಮ ಭಾರತೀಯ ಆಟಗಾರ ಯಾರು?
- ರಾಜವರ್ಧನ್ ಸಿಂಗ್ ರಾಶೋಡ
- ಅಭಿನವ ಬಿಂದ್ರಾ
- ನೀರಜ್ ಚೋಪ್ರಾ
- ಸೈನಾ ನೆಹ್ವಾಲ್
ಉತ್ತರ: ಅಭಿನವ ಬಿಂದ್ರಾ
ರಾಜ್ಯ ಮತ್ತು ಕೇಂದ್ರ ಸರ್ಕಾರಿ ಪರೀಕ್ಷೆ - ಪ್ರಚಲಿತ ತಟವಡು
37. ಗ್ರೇಡೆಡ್ ರೆಸ್ಪಾನ್ಸ್ ಆಕ್ಟನ್ ಪ್ಲಾನ್ (GRAP) ದೆಹಲಿ-NCR ನಲ್ಲಿ ಯಾವ ಪರಿಸರ ಸಮಸ್ಯೆಯನ್ನು ನಿಭಾಯಿಸಲು ವಿನ್ಯಾಸಗೊಳಿಸಲಾದ ಚೌಕಟ್ಟಾಗಿದೆ?
- ಶಬ್ದ ಮಾಲಿನ್ಯ
- ವಾಯು ಮಾಲಿನ್ಯ
- ಪ್ಲಾಸ್ಟಿಕ್ ಶ್ಯಾಜ್ಯ ನಿರ್ವಹಣೆ
- ಜಲ ಮಾಲಿನ್ಯ
ಉತ್ತರ: ವಾಯು ಮಾಲಿನ್ಯ
38. ಸೂರ್ಯನ ಕರೋನಲ್ ಮಾಸ್ ಎಚೆಕ್ಟನ್ (CME) ಚಂದ್ರನ ಮೇಲೆ ಬೀರುವ ಪರಿಣಾಮವನ್ನು ಮೊದಲ ಬಾರಿಗೆ ಗಮನಿಸಿದ ಭಾರತೀಯ ಚಂದ್ರಯಾನ ಯಾವುದು?
- ಚಂದ್ರಯಾನ-1
- ಚಂದ್ರಯಾನ-2
- ಚಂದ್ರಯಾನ-3
- ಆದಿತ್ಯ-L1
ಉತ್ತರ: ಚಂದ್ರಯಾನ-3
39. 9ನೇ ದೀಪೋತ್ಸವದಲ್ಲಿ 26 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸುವ ಮೂಲಕ ಉತ್ತರ ಪ್ರದೇಶದ ಯಾವ ನಗರವು ಗಿನ್ನಿಸ್ ವಿಶ್ವ ದಾಖಲೆಯನ್ನು ಸಾಧಿಸಿದೆ?
- ವಾರಾಣಸಿ
- ಲಕ್ಷ್ಮೀ
- ಅಯೋಧ್ಯೆ
- ಮಥುರಾ
ಉತ್ತರ: ಅಯೋಧ್ಯೆ
40. 125ನೇ ಭಾರತೀಯ ಫುಟ್ಬಾಲ್ ಅಸೋಸಿಯೇಷನ್ (IFA) ಶೀಲ್ಡ್ 2025 ಅನ್ನು ಯಾವ ಫುಟ್ಬಾಲ್ ತಂಡ ಗೆದ್ದಿದೆ?
- ಈಸ್ಟ್ ಬೆಂಗಾಲ್ ಎಫ್ಸಿ
- ಒಡಿಶಾ ಎಫ್ಸಿ
- ನಾರ್ತ್ಈಸ್ಟ್ ಯುನೈಟೆಡ್ ಎಫ್ಸಿ
- ಮೋಹನ್ ಬಗಾನ್ ಸೂಪರ್ ಜೈಂಟ್
ಉತ್ತರ: ಮೋಹನ್ ಬಗಾನ್ ಸೂಪರ್ ಜೈಂಟ್
ಭೂಗೋಳಶಾಸ್ತ್ರ – ಭಾರತದ ನದಿವ್ಯವಸ್ಥೆ
532. ಸಾತೊಡ್ಡಿ ಜಲಪಾತವು ಯಾವ ನದಿಯಿಂದ ಸೃಷ್ಟಿಯಾಗಿದೆ?
- ಸಬರಮತಿ ನದಿ
- ಅರ್ಕಾವತಿ
- ಕಾಳಿ
- ಹೇಮಾವತಿ
ಉತ್ತರ: ಕಾಳಿ
533. ಮಾಗೋಡು ಜಲಪಾತವು ಯಾವ ನದಿಯಿಂದ ಸೃಷ್ಟಿಯಾಗಿದೆ?
- ಪೆರಿಯಾರ್ ನದಿ
- ಹೇಮಾವತಿ ನದಿ
- ಕಾಳಿ ನದಿ
- ಬೇಡ್ತಿ ನದಿ
ಉತ್ತರ: ಬೇಡ್ತಿ ನದಿ
534. ಹಿಡಕಲ್ ಅಣೆಕಟ್ಟನ್ನು ಯಾವ ನದಿಗೆ ನಿರ್ಮಿಸಲಾಗಿದೆ?
- ಮಲಪ್ರಭಾ
- ಕೃಷ್ಣಾ
- ಭೀಮಾ
- ಘಟಪ್ರಭಾ
ಉತ್ತರ: ಘಟಪ್ರಭಾ
ಚಂದ್ರಯಾನ-2 ಉಪಗ್ರಹದಿಂದ ಮಂಜುಗಡ್ಡಿ, ಮಣ್ಣು ಚಿತ್ತ ರವಾನೆ ಧ್ರುವ ಪ್ರದೇಶಗಳ ಅಭೂತಪೂರ್ವ ಒಳನೋಟ
ಚಂದ್ರನ ಧ್ರುವ ಸಂಶೋಧನೆ ಯನ್ನು ಹೆಚ್ಚಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-2 ಉಪಗ್ರಹ ಈಗ ಚಂದ್ರನ ಮೇಲಿನ ಮಂಜುಗಡ್ಡೆ ಹಾಗೂ ಮಣ್ಣು ಸೇರಿದಂತೆ ಈ ಗ್ರಹದ ಧ್ರುವ ಪ್ರದೇಶಗಳ ಅಭೂತಪೂರ್ವ ಒಳನೋಟವನ್ನು ನೀಡಿದೆ.
1000 ರನ್: ಅಭಿಷೇಕ್ ನಂ.1
ಭಾರತ ನಾಯಕ ಸೂರ್ಯ ಹೆಸರಲ್ಲಿದ್ದ ದಾಖಲೆ ವತನ
ಅಭಿಷೇಕ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಎಸೆತಗಳ ಆಧಾರದಲ್ಲಿ ಅತಿವೇಗವಾಗಿ 1000 ರನ್ ಪೂರ್ಣಗೊಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಂದೇ ಭಾರತ್ ರೈಲು
'ಪ್ರಪಂಚದಾದ್ಯಂತ ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಬೆಳವಣಿಗೆಯಲ್ಲಿ ಮೂಲಸೌಕರ್ಯವು ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿಯೂ ಮೂಲಸೌಕರ್ಯಗಳು ಉತ್ತಮಗೊಳ್ಳುತ್ತಿದ್ದು, ನಮ್ಮ ದೇಶ ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಕಾ: ವಿಶ್ರಾಂತಿ ಭೂ ದಾಖಲೆಗಳು ಮತ್ತು ನಾಗರಿಕ ಸಲೀಕರೇದರ್ ಹೊಸ ಹೆಣ್ಣೆ
ನಿರ್ಮಿಸುತ್ತಿದೆ, ಇದು ನಾಗರಿಕರಿಗೆ ಜೀವನವನ್ನು ಸುಲಭಗೊಳಿಸುವುದಲ್ಲದೆ, ಹಟ್ಟಣಗಣ ಮತ್ತು ನಗರಗಳ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ.
ಕಬ್ಬು ಬೆಳೆಗಾರರ ಬೆಂಬಲ ಬೆಲೆ ಹೋರಾಟ
ಬ್ಲೂ ಎಂಬ ಸಿಹಿಯಾದ ಸಕ್ಕರೆ ರೈತರ ಪಾಲಿಗೆ ಕಹಿ ಆಗುತ್ತಿರುವ ಸಂದರ್ಭದಲ್ಲಿ, ಕರ್ನಾಟಕದ ಕೆಲವು ಜಿಲ್ಲೆಗಳ ರೈತರು ನಡೆಸುತ್ತಿದ್ದ ಪ್ರತಿಭಟನೆ ಸಾಕಷ್ಟು ಚರ್ಚೆಗೆ ಒಳಗಾಗಿ, ಒಂದಷ್ಟು ಪರಿಹಾರ ಸೂತ್ರಗಳು ಸಿದ್ಧವಾಗಿರುವ ಈ ಸಂದರ್ಭದಲ್ಲಿ, ರೈತ ಸಮೂಹ ಮುಂದೆ ತಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿವಿಧ ಮಾರ್ಗಗಳನ್ನು, ಬೇರೆ ಬೇರೆ ಆಸ್ತಿಗಳನ್ನು ಕಂಡುಕೊಳ್ಳಬೇಕಿದೆ.
ದಿಲ್ಲಿಯನ್ನು ಆವರಿಸಿದೆ ವಿಷಗಾಳಿ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ಮತ್ತಷ್ಟು ಹದಗೆಟ್ಟಿದೆ. ವಾಯುಗುಣ ಮಟ್ಟ ಅಪಾಯಕಾರಿ ಹಂತ ತಲುಪಿದ್ದು, ರಾಷ್ಟ್ರ ರಾಜಧಾನಿ ಪ್ರದೇಶ (ಎನ್ಸಿಆರ್) ವಿಷಮಯ ಸ್ಥಿತಿಯತ್ತ ಚಾರಿದೆ.
🔗 ಡೌನ್ಲೋಡ್ ಮಾಡಲು:
👉 ಇಲ್ಲಿ
ಕ್ಲಿಕ್ ಮಾಡಿ
(ದಯವಿಟ್ಟು Telegram ಚಾನೆಲ್ ಮೂಲಕ ಸಂಪರ್ಕದಲ್ಲಿರಿ).
(ದಯವಿಟ್ಟು WhatsApp ಚಾನೆಲ್ ಮೂಲಕ ಸಂಪರ್ಕದಲ್ಲಿರಿ).
KSPGK ವೆಬ್ಸೈಟ್: https://kspgk.blogspot.com/
KSPGK ಒಂದು ವಿಶಿಷ್ಟ ಆನ್ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಉಚಿತ PDF ನೋಟ್ಸ್ಗಳನ್ನು ಒದಗಿಸುತ್ತದೆ.
PDF ಫೈಲ್ ಡೌನ್ಲೋಡ್ ಕ್ವಿಕ್ ಲಿಂಕ್ಸ್:
|
ವಿಷಯ |
ಡೌನ್ಲೋಡ್ ಲಿಂಕ್ |
|
Model Question Papers |
|
|
Spardha Vijetha Magazines |
|
|
History PDF Books |
|
|
ಸಂವಿಧಾನ |
|
|
ಕನ್ನಡ ವ್ಯಾಕರಣ |
💡 KSPGK ಧ್ಯೇಯ:
Education
should be FREE FOR ALL.
ಎಲ್ಲರಿಗೂ ಉಚಿತ ಶಿಕ್ಷಣ — ಎಲ್ಲರಿಗೂ ಯಶಸ್ಸು!
📲 Stay Connected
🟢 ನಮ್ಮ ಟೆಲಿಗ್ರಾಂ ಚಾನೆಲ್ಗೆ ಸಂಪರ್ಕಿಸಿ
— ಪ್ರತಿದಿನ ಹೊಸ ನೋಟ್ಸ್ ಹಾಗೂ ಅಪ್ಡೇಟ್ಗಳನ್ನು ಪಡೆಯಿರಿ.
👉
Join
KSPGK Telegram Channel
Thank You for Visiting KSPGK!
Education should be FREE FOR ALL.
Stay connected with us on our Telegram
Channel for daily updates and new notes.
No comments:
Post a Comment